ಆಯುರ್ವೇದದ ಪ್ರಕಾರ ದೇಹದ ಜೈವಿಕ ಕ್ರಿಯೆಯನ್ನು ೩ ದೋಷಗಳು (ತ್ರಿದೋಷ ) ನಿಯಂತ್ರಿಸುತ್ತವೆ . ಅವುಗಳೆಂದರೆ ವಾತ , ಪಿತ್ತ ಹಾಗು ಕಫ. ಈ ೩ ದೋಷಗಳು ಸಮಸ್ಥಿತಿಯಲ್ಲಿದ್ದರೆ ದೇಹ ಆರೋಗ್ಯವಾಗಿರುತ್ತದೆ . ಇವು ವಿಷಮಿಸಿದರೆ ಅನಾರೋಗ್ಯ ಉಂಟಾಗುತ್ತದೆ. ಇವು ವಿಷಮ ಸ್ಥಿಥ್ಗೆ ಬಂದಾಗ ದೇಹದಲ್ಲಿನ ಅಂಗ ಹಾಗು ಅಂಗಾಂಶಗಳನ್ನು ಕೆಡಿಸುತ್ತವೆ ಅಥವಾ ದೂಶಿಸುತ್ತವೆ ಆದ್ದರಿಂದ ಇವನ್ನು ದೋಷಗಳು ಎಂದು ಕರೆಯುತ್ತಾರೆ.
ತ್ರಿದೊಶಗಳಲ್ಲಿ ವಾಯು ಅಥವಾ ವಾತವೊಂದೆ ಶರೀರದ ಎಲ್ಲಾ ಭಾಗಗಳಲ್ಲೂ ಹಾಗು ಕೋಶಗಳಲ್ಲೂ ಚಲಿಸುವ ಗುಣವುಳ್ಳದ್ದು. ಮಿಕ್ಕೆರಡು ದೋಷಗಳು ಕಾಲಿಲ್ಲದವರಂತೆ ವಾತ ದೋಷ ಎಲ್ಲಿ ಹೊತ್ತುಕೊಂಡು ಹೋಗುತ್ತದೋ ಅಲ್ಲಿ ಹೋಗುತ್ತವೆ . ಮೋಡಗಳು ಗಾಳಿ ಹೊತ್ತೊಯ್ದೆಡೆ ಹೋಗುವಂತೆ .
ನಮ್ಮ ಜೀವನ ಶೈಲಿಯು ಅಂದರೆ ಆಹಾರ, ನಿದ್ದೆ, ವ್ಯಾಯಾಮ, ಚಲನೆ , ಮನಸ್ಸು ದೋಷಗಳ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ . ಈ ದೈನಂದಿನ ಕ್ರಿಯೆಗಳು ಆಯಾ ತಪ್ಪಿದಾಗ ದೊಷಗಳು ವಿಕೃತವಾಗಿ ದೇಹ ಅನಾರೋಗ್ಯದಿಂದ ಬಳಲುತ್ತದೆ . ಅಂತೆಯೇ ರೋಗಗಳು ಕಾಣಿಸಿಕೊಳ್ಳುತ್ತವೆ
Subscribe to:
Post Comments (Atom)
0 comments:
Post a Comment